:User:Dayanand Umachagi/sandbox
{{AFC submission|d|lang|Kannada|u=Dayanand Umachagi|ns=2|decliner=Jlwoodwa|declinets=20250615171618|ts=20250615171334}}
{{AFC submission|d|lang|Kannada|u=Dayanand Umachagi|ns=2|decliner=KylieTastic|declinets=20250615162130|small=yes|ts=20250615161116}}
{{AfC topic|blp}}
==
{{Draft topics|stem}}
==
ಜನನ ಮತ್ತು ಬಾಲ್ಯ :
ಡಾ. ವೈ. ಎಂ. ಭಜಂತ್ರಿಯವರ ಪೂರ್ಣ ಹೆಸರು “ಯಲ್ಲಪ್ಪ ಮಾರುತಿ ಭಜಂತ್ರಿ”. ಶ್ರೀ ಮಾರುತಿ ಹಾಗೂ ಶ್ರೀಮತಿ ಭೀಮವ್ವ ಮಾರುತಿಯವರ ರತ್ನಗರ್ಭ ಸಂಜಾತರಾಗಿ ೨೭- ೧೨-೧೯೬೫ ರಂದು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪುಟ್ಟ ಹಳ್ಳಿ ತಳಕಟನಾಳದಲ್ಲಿ ಜನಿಸಿದರು.
ನುಲಿ ಹೊಸೆಯುವುದು, ಕಸಬರಿಗಿ ಕಟ್ಟುವುದು, ಸಿಂಬಿ-ನೆಲುವು, ಕಣ್ಣಿ ಮಾಡುವುದು ತಾಯಿ ಭೀಮವ್ವರ ನಿತ್ಯ ಕಾಯಕ. ಅಪ್ಪ ಹೆಣೆದು ಕೊಟ್ಟ ಬುಟ್ಟಿಗಳ ಜೊತೆಗೆ ತಾನು ತಯಾರಿಸಿದ ಇವುಗಳನ್ನು ಮಾರಲು ಬರಿಗಾಲಲ್ಲಿಯೇ ಊರೂರು ಅಲೆಯುತ್ತಿದ್ದಳು.
ತಂದೆ ಮಾರುತಿ ಭಜಂತ್ರಿಯವರಿಗೆ ಶಹನಾಯಿ ನುಡಿಸುವುದು, ಬುಟ್ಟೆ ಹೆಣೆಯುವುದು, ಕಸಬರಿಗಿ ಕಟ್ಟುವುದು, ನುಲಿ ಹೊಸಯುವುದು ಕುಲ ಕಸುಬು. ತಾಯಿ ಭೀಮವ್ವ ಹಗ್ಗ ಹೊಸೆದೇ ಇವರ ಬದುಕನ್ನ ಗಟ್ಟಿಗೊಳಿಸಿದವಳು. ನಿತ್ಯ ಹಳ್ಳ-ಹೊಳೆ ದಂಡೆಗಳಲೆಲ್ಲಾ ಅಲೆದು ಮೆದೆ ಹುಲ್ಲು, ಕಟ್ಟಿಗೆ ತಂದು ಬುಟ್ಟಿ ಹೆಣದಾಗಲೇ ಇವರ ಹೊಟ್ಟೆ ತುಂಬುತ್ತಿತ್ತು. ಮದುವೆ ಸಮಾರಂಭಗಳಲ್ಲಿ ಮಂಗಳವಾದ್ಯ ನುಡಿಸುತ್ತಿದ್ದ ತಂದೆ ಮಾರುತಿ, ಊರ ದೇವರ ಪೂಜಾ ಕಾರ್ಯಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು. ಇದರಿಂದ ಆಯಾಗಾರಿಕೆಯ ಆದಾಯವು ಇತ್ತು. ಆದರೆ ಇವರ ತಂದೆ ತಾಯಿ ಎಂತದ್ದೇ ಕಠಿಣ ಸ್ಥಿತಿಯಲ್ಲಿಯೂ ಎರಡೊತ್ತಿನ ಊಟಕ್ಕೇನು ಕೊರತೆ ಮಾಡಿರಲಿಲ್ಲ.
ʼಮಕ್ಕಳಿರಲೆವ್ವ ಮನೆ ತುಂಬಾʼ ಎಂಬಂತೆ ಇವರಿಗೆ ಒಟ್ಟು 9 ಜನ ಮಕ್ಕಳು . ಇಬ್ಬರು ತೀರಿ ಹೋಗಿ, ಮೂರು ಹೆಣ್ಣು ಮತ್ತು ನಾಲ್ಕು ಜನ ಗಂಡು ಮಕ್ಕಳು ಉಳಿದುಕೊಂಡರು. ಇವರ ಎದೆಯಲ್ಲಿ ಅಕ್ಷರ ಬಿತ್ತಿದವಳು ತಾಯಿ ಭೀಮವ್ವಳಾದರೆ, ಕೂರಿಗೆ ಹಿಡಿದವರು ತಂದೆ ಮಾರುತಿ. ಈ ಕಾರಣಕ್ಕಾಗಿ ಕವಿ ʼಅಕ್ಷರ ಕಲಿಯದ ಅವ್ವ ನನ್ನ ಪಾಲಿನ ಸಾವಿತ್ರಿಬಾಯಿ ಫುಲೆʼ ಎಂದು ಹೆಮ್ಮೆಪಡುತ್ತಾರೆ.
ಶಿಕ್ಷಣ :
ಇವನು ಒಂದಿಷ್ಟು ಕಲಿಯಲಿ ಎಂದು ಆಸೆ ಪಟ್ಟಿದ್ದ ತಂದೆ ಶಾಲೆಗೆ ಸೇರಿಸಿದರು. ವೈ. ಎಂ. ಭಜಂತ್ರಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗೋಕಾಕದಲ್ಲಿಯೇ ಪೂರ್ಣಗೊಳಿಸಿದರು. ಆದರೆ ಇವರಿಗೆ ಶಾಲೆಗಿಂತ ಊರೂರು ಅವ್ವನ ಜೊತೆ ಬುಟ್ಟಿ ಮಾರಲು ಅವಳ ಹಿಂದೆ ಹೋಗುವ ಹಂಬಲ. ಅನೇಕ ಸಲ ಶಾಲೆ ತಪ್ಪಿಸಿ ಅವ್ವನ ಹಿಂದೆಯೇ ಹೋಗಿ, ಅಪ್ಪನ ಜರಲಿನ ರುಚಿ ಉಂಡಿದ್ದು ಉಂಟು. ಅವ್ವ ಬುಟ್ಟಿ ಮೊದಲಾದವುಗಳನ್ನು ಹೊತ್ತುಕೊಂಡು ಮುಂದೆ ಮುಂದೆ ಹೋಗುತ್ತಿರುವಾಗ ಇವರು ತಾಯಿಯ ಹಿಂದೆ ತಲೆ ಮೇಲೆ ಸಣ್ಣದೇನನ್ನಾದರೂ ಇಟ್ಟುಕೊಂಡು ತಾಯಿಯನ್ನೇ ಹಿಂಬಾಲಿಸುತ್ತಿದ್ದರು. ಆಗ ಅವರು ಪ್ರಾಥಮಿಕ ಶಾಲೆಯ ನಾಲ್ಕನೇ ವರ್ಗದ ವಿದ್ಯಾರ್ಥಿ.
ಹೀಗೆ ಒಂದು ದಿನ ತಾಯಿ ಹಿಂದೆ ಹೋಗುತ್ತಿರುವಾಗ ಅವ್ವನನ್ನು ನೋಡಿದರು. ಅವಳ ಹಿಂಬದಿಯ ತೊಡೆಯ ಮೇಲಿನ ಸೀರೆ ಹರಿದು ಚರ್ಮ ಕಾಣುತ್ತಿತ್ತು. ಅದ್ಯಾಕೋ ಗೊತ್ತಿಲ್ಲ ಕಂಬದಂತೆ ನಿಂತು ಬಿಟ್ಟರು, ಕಣ್ಣಲ್ಲಿ ಜಲಪಾತ ವಿತ್ತು, ಎದೆ ನಡುಗಿತು. ʼಯವ್ವಾ ನಾ ಇನ್ ಮುಂದ ನಿನ್ ಜೋಡಿ ಬರುದಿಲ್ಲʼ ಎಂದವರೆ ಒಡುತ್ತ ಶಾಲೆಗೆ ಹೋದರು. ಅಂದಿನಿಂದ ಶೈಕ್ಷಣಿಕ ಜೀವನದಲ್ಲಿ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡಲಿಲ್ಲ.
ಪಿಯುಸಿ ವಿಜ್ಞಾನದಲ್ಲಿ ಪಾಸಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೀಟು ಸಿಕ್ಕರು ಅಲ್ಲಿ ಓದಲಾಗಲಿಲ್ಲ. ಅವ್ವನ ಆಸೆಯಂತೆ ಕಡಿಮೆ ಖರ್ಚಿನ ಬಿ.ಎ ಪದವಿ ಸೇರಿದರು. 1987 ರಲ್ಲಿ ತಮ್ಮ ಬಿ.ಎ ಪದವಿಯನ್ನು 73.77 ಶೇಕಡ ಪ್ರತಿಶತದೊಂದಿಗೆ ಪ್ರಶಸ್ತಿ ಪಡೆದು ಉತ್ತೀರ್ಣರಾಗಿ . ನಂತರ ಕರ್ನಾಟಕ ವಿಶ್ವವಿದ್ಯಾಲಯದ ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಸ್ನಾತಕೋತ್ತರ ಪದವಿ ಪೂರೈಸಲು ಸೇರಿದ ಇವರು.
1989 ರಲ್ಲಿ ಎಂ.ಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದು ಕಲಾ ನಿಯಕ್ಕೆ ಮೂರನೇ ರ್ಯಾಂಕ್, ವಿಶ್ವವಿದ್ಯಾನಿಲಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದರು. ಬಸವೇಶ್ವರರ ಕುರಿತಾದ ಸ್ನಾತಕೋತರ ಡಿಪ್ಲೋಮಾ ಅಧ್ಯಯನಕ್ಕಾಗಿ 1989 ರ ಮೇ ತಿಂಗಳಲ್ಲಿ ಚಿನ್ನದ ಪದಕ ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದರು.
1990ರಲ್ಲಿ ನೆಟ್ ಮತ್ತು 1991ರಲ್ಲಿ ಜೇ. ಆರ್. ಎಪ್ ಪರೀಕ್ಷೆಗಳಲ್ಲಿ ಸಾಧನೆ ಗೈದ ಇವರು. 2002 ರಲ್ಲಿ ʼದು.ನಿಂ ಬೆಳಗಲಿಯವರ ಕಾದಂಬರಿಗಳುʼ ಎಂಬ ವಿಷಯದ ಕುರಿತು ಪಿ. ಎಚ್ಚ್. ಡಿ ವರದಿಯನ್ನು ಮಂಡಿಸಿದ ಇವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ದಿಂದ ಡಾಕ್ಟರೇಟ್ ಪದವಿ ಪಡೆದಿದರು.
ಸೇವಾ ವಿವರ:
ಡಾ. ವೈ. ಎಂ. ಭಜಂತ್ರಿಯವರು ನೆಚ್ಚಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಪ್ರೇಮಿ. ಇವರು 1991ರಲ್ಲಿ ಎಸ್.ವಿ.ಎಂ. ಕಾಲೇಜ್ ಇಲಕಲ್ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು 1993ರ ವರೆಗೆ ೨ ವರ್ಷ ಸೇವೆ ಸಲ್ಲಿಸಿ. 1993ರಿಂದ 1996ರ ವರೆಗೆ 3ವರ್ಷಗಳ ಕಾಲ ಜಿ.ಪಿ. ಪೋರವಾಲ ಕಾಲೇಜು ಸಿಂದಗಿಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರೆ.
1996 ರಿಂದ 2007 ಸುಮಾರು 11 ವರ್ಷಗಳ ಕಾಲ ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2007 ರಿಂದ 2015 ಸುಮಾರು 8ವರ್ಷ ಸವದತ್ತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2015 ರಿಂದ ಪ್ರಸ್ತುತ ಇಲ್ಲಿಯವರೆಗೆ ಹುಬ್ಬಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ವೈ. ಎಂ. ಭಜಂತ್ರಿಯವರು ಬಾಲ್ಯದಲ್ಲಿ ಪಟ್ಟ ಕಷ್ಟ, ನೋವು-ನಲಿವು, ಅವರ ಸಾಹಿತ್ಯ ಮತ್ತು ಸಾಧನೆಗೆ ಪ್ರೇರಣೆಯಾಯಿತು. ಅವರ ತಂದೆ-ತಾಯಿ ನೀಡಿದ ಶಿಕ್ಷಣನೀತಿ, ತೋರಿದ ಮಾರ್ಗ ಸಮಾಜದಲ್ಲಿ ಅವರನ್ನು ಒಬ್ಬ ಉತ್ತ್ ವಾಘ್ಮಿಯನ್ನಾಗಿಸಿದೆ.
ಡಾ. ವೈ. ಎಂ. ಭಜಂತ್ರಿಯವರು ಪ್ರಸ್ತುತ ನೆಲೆಸಿರುವುದು ವಿದ್ಯಾಕಾಶಿ ಧಾರವಾಡದಲ್ಲಿ. ಲಕ್ಷ್ಮೀನಿವಾಸದಲ್ಲಿ ಲಕ್ಷ್ಮೀಯ ಕಳೆಯನ್ನು ಹೊಂದಿರುವ ಬಾಳಸಂಗಾತಿ ಸುಜಾತಾ ಮತ್ತು ಮುದ್ದಾದ ಎರಡು ಗಂಡು ಮಕ್ಕಳಾದ ಅಭಿಷೇಕ ಮತ್ತು ಅಮಿತ್ ಜೊತೆಯಲ್ಲಿ ಸುಂದರವಾದ ಕುಟುಂಬದಲ್ಲಿ ಸಂತಸದ ದಿನಗಳನ್ನು ಕಳೆಯುತ್ತಿದ್ದಾರೆ.
ಡಾ.ವೈ.ಎಂ.ಭಜಂತ್ರಿಯವರ ಮಾರ್ಗದರ್ಶನದಲ್ಲಿ, ಹಂಪಿ ವಿಶ್ವವಿದ್ಯಾಲಯದಿಂದ ಮಾನ್ಯ ಪಡೆದ ಸಂಸ್ಥೆ ʼಶ್ರೀಮಂಜುನಾಥೇಶ್ವರ ಸಂಶೋಧನಾ ಕೇಂದ್ರ, ಧಾರವಾಡʼದಲ್ಲಿ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳು ಪಿ.ಎಚ್.ಡಿ ಪಡೆದಿದ್ದಾರೆ. ಮತ್ತು ಇನ್ನು ಮೂರು ಜನ ಸಂಶೋಧನಾ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಅಧ್ಯಯನ ಮಾಡುತ್ತಿದ್ದಾರೆ.
ಡಾ.ವೈ.ಎಂ.ಭಜಂತ್ರಿಯವರ ಕನ್ನಡ ಸಾಹಿತ್ಯ :
ಡಾ. ವೈ. ಎಂ. ಭಜಂತ್ರಿಯವರ ಪ್ರಥಮ ಕವನ ಸಂಕಲನ “ಕೆಂಪು ನೀರು” 2009ರಲ್ಲಿ ಪ್ರಕಟಿಸಿದರು. ಈ ಕವನ ಸಂಕಲನ ಅವರ ಹೋರಾಟದ ಬದುಕಿಗೆ ಜೀವಧಾತುವಾದ ಅಮ್ಮನಂತೆ ಆಶ್ರಯ ನೀಡಿತು. ಇವರ ಪ್ರತಿಭೆಗೆ ಕಳಶವಿಟ್ಟಂತಾಯಿತು. ಇದು ತನ್ನ ಕವನಗಳ ಮೂಲಕ ಓದುಗನ ಮನವನ್ನು ಸೆಳೆಯಿತು. ಸಾಮಾಜಿಕ ಸಾಂಸ್ಕೃತಿಕ ಅರ್ಥ ಹೊಂದಿದ್ದು ಕೆಂಪುಬಣ್ಣ ಇದು ಕ್ರಾಂತಿಯ ಸಂಕೇತವಾಗಿತ್ತು .
ಇವರ ಎರಡನೇ ಕವನ ಸಂಕಲನ "ಹುತಾತ್ಮನ ಪೆನ್ನು" 2018ರಲ್ಲಿ ಪ್ರಕಟವಾಯಿತು. ಈ ಸಂಕಲನದಲ್ಲಿರುವ ಕವನಗಳು ದಲಿತಾನುಭವದ ಕಾವ್ಯದ ಕಡಲುಗಳಾಗಿವೆ. ಇದು 44 ಕವಿತೆಗಳನ್ನು ಹೊಂದಿದ್ದು ಯುದ್ಧದಿಂದ ಪ್ರಾರಂಭವಾದ ಕವಿತೆ ಪ್ರೀತಿಯ ಬೀಜಗಳನ್ನು ಹುಡುಕುತ್ತಾ ಹೋಗುತ್ತದೆ.
ಕಥಾ ಸಂಕಲನಗಳು :
• ಹೆಣದ ಹಿಂದೆ (2011)
• ಕತ್ತರಿಸಿದ ನಾಲಿಗೆ (2018)
ಕನ್ನಡ ಛಂದೋ ಅಲಂಕಾರ (ಛಂದಸ್ಸು-ಅಲಂಕಾರ) 2010
ʼದು.ನಿಂ ಬೆಳಗಲಿಯವರ ಕಾದಂಬರಿಗಳುʼ ಸಂಶೋಧನಾ ಪ್ರಬಂಧ 2010
ಮುಖಾಮುಖಿ (ವಿಮರ್ಶೆ) 2013
ಕಥಾವಿಹಾರ (ಸಂಪಾದನಾ ಕೃತಿ) 2013
ಸಾಹಿತ್ಯ ಸಂಗಾತಿ-5 ಪತ್ರಿಕೆ 1 (ಸಂ.ಆರ್.ಸಾಯು.ಪಠ್ಯ) 2013
ಸಾಹಿತ್ಯ ಸಂಗಾತಿ-5 ಪತ್ರಿಕೆ 1 (ಸಂ.ಆರ್.ಸಾಯು.ಪಠ್ಯ) 2013
ಹಳಗನ್ನಡ ವ್ಯಾಕರಣ ಮತ್ತು ದ್ರಾವಿಡ ಭಾಷಾವಿಜ್ಞಾನ, ಪತ್ರಿಕೆ 2 (ಕೆ.ಯು.ಡಿ ಪಠ್ಯ, ಬಿ.ಎ 6ನೇ ಸೆಮಿಸ್ಟರ್) 2016
ನಡುಗನ್ನಡ ಸಾಹಿತ್ಯ ಸಂಕಲನ (ಕೆ.ಯು.ಡಿ ಪಠ್ಯ, 4ನೇ ಸೆಮಿಸ್ಟರ್) ಪಠ್ಯ, 2018
ಉದ್ಭವ ಮೂರ್ತಿ ಕಲ್ಲಾಪುರ ಬಸವಣ್ಣ (ಸಂಪಾದನೆ) 2008
ಬೆಳಗಾವಿ ಜಿಲ್ಲಾ ದಲಿತ ಕಾವ್ಯ (ಸಂಪಾದನೆ) 2013
ಸಚ್ಚರಿತ (ಸಂಪಾದನೆ) 2015
ಸಹೃದಯಿ (ಸಂಪಾದನೆ) 2017
ಅಂಬೇಡ್ಕರ ಪುರಾಣ ಕಥಾಸಾರ 2015
ಮುದ್ರಣದಲ್ಲಿರುವ ಕೃತಿಗಳು :
• ರಕ್ತಪಾನ?! (ಕಥಾಸಂಕಲನ)
• ರಕ್ತದ ಕಲೆಗಳ ಮೇಲೆ (ಕಥಾಸಂಕಲನ)
• ಕಾಯಕ ಯೋಗಿ ನುಲಿಯ ಚಂದಯ್ಯ
• ಕುಳುವ ಕನ್ನಡ ಪದಕೋಶ (ಶಬ್ದಕೋಶ)
• ಮುಖಾ ಮುಖಿ, ಭಾಗ-೨
• ಮುಖಾ ಮುಖಿ, ಭಾಗ-೩
• ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು
ಇವರ ಲೇಖನಗಳು 50ಕ್ಕಿಂತ ಹೆಚ್ಚು ಬಾರಿ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರಸಾರಗೊಂಡಿವೆ.
ಡಾ.ವೈ.ಎಂ.ಭಜಂತ್ರಿಯವರ ಇತರ ಸಾಧನೆಗಳು ಮತ್ತು ಜವಾಬ್ದಾರಿಗಳು :
- 2013 ಫೆಬ್ರುವರಿಯಲ್ಲಿ ಚಂದನ ಟಿವಿಯ ʼಬೆಳಗುʼ ಕಾರ್ಯಕ್ರಮದ ಸಂದರ್ಶನದಲ್ಲಿ ಭಾಗಿಯಾಗಿದ್ದರು.
- ಪ್ರಸ್ತುತ ಇವರು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವತ್ತಿದ್ದಾರೆ.
- ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.
- ಗೌರವ ಕಾರ್ಯದರ್ಶಿಗಳು ಕ.ವಿ., ಕ.ಅ. ಪರಿಷತ್ತು, ಧಾರವಾಡದಲ್ಲಿ ಮೂರು ವರ್ಷ ಸೇವೆ.
- ಕನ್ನಡ ಕಾವಲು ಸಮಿತಿ ಸದಸ್ಯರಾಗಿ ಮೂರು ವರ್ಷ ಸೇವೆ.
- ರಾಜ್ಯ ಸಾಕ್ಷರತಾ ಸಂಪನ್ಮೂಲ ವ್ಯಕ್ತಿಗಳಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.
- ರಾಜ್ಯ ಯುವಜನ ಮೇಳದ ನರ್ಣಾಯಕ ಸಂಘದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
- ಸತತ 11 ರ್ಷಗಳ ಕಾಲ ವಿವಿಧ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಅಧಿಕಾರಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ.
- ಧಾರವಾಡದ ಕನ್ನಡ ವಿದ್ಯಾವರ್ಧಕ ಸಂಘಕ್ಕೆ ಆಜೀವ ಸದಸ್ಯತ್ವವನ್ನು ಪಡೆದ ಕನ್ನಡದ ಕಣ್ಮಣಿ ಇವರಾಗಿದ್ದಾರೆ.
- ರಾಯಚೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- ಎರಡು ವರ್ಷಗಳ ಕಾಲ ಕನ್ನಡ ಹಂಪಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- ಇವರ ಕಥಾಸಂಕಲನದ ಕುರಿತು ಪಿ.ಎಚ್.ಡಿ ಅಧ್ಯಯನ ಮಾಡುತ್ತಿರುವ ಶ್ರೇಯಸ್ಸು ಮಹಾಂತಮ್ಮರಿಗೆ ಸಲ್ಲುತ್ತದೆ.
- ಇದುವರೆಗೆ 20ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ.
- ಕನ್ನಡ ಭಾಷಾ ತಜ್ಞರಾಗಿ ಇವರು 2ಬಾರಿ ವಿವಿಧ ಕಾಲೇಜುಗಳಲ್ಲಿ,
ನವೋದಯ ಕೇಂದ್ರಿಯ ವಿದ್ಯಾಲಯದಲ್ಲಿ 2 ಬಾರಿ ಮತ್ತು
ಉನ್ನತ ಶಿಕ್ಷಣದಲ್ಲಿ 2ಬಾರಿ ಭಾಗಿಯಾಗಿದ್ದಾರೆ.
- ಅಲ್ಲದೇ ವಿಭಾಗ ಮತ್ತು ರಾಜ್ಯಮಟ್ಟದ ಯುವಜನ ಮೇಳದ ಕಾರ್ಯ ಕ್ರಮಗಳ ನಿರ್ಣಾಯಕರಾಗಿ ಭಾಗವಹಿಸಿದ್ದಾರೆ.
- ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 16ಕ್ಕಿಂತ ಹೆಚ್ಚು ಸೆಮಿನಾರ್ಗಳಲ್ಲಿ ಪಾಲ್ಗೊಂಡಿದ್ದಲ್ಲದೇ ಸ್ವತಃ 4ಬಾರಿ ಕನ್ನಡ ಸೆಮಿನಾರ್ಗಳನ್ನು ಆಯೋಜನೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
- ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಂಘಟನೆಯ ಒಟ್ಟು ಆರು ಸಮ್ಮೇಳನಗಳ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.
- ಅತ್ಯಂತ ಮಹತ್ವದ ಕಾರ್ಯವಾದ ಪಠ್ಯ-ಪುಸ್ತಗಳು, ಪರಿಷ್ಕರಣಾ ವಿಭಾಗದ ಅಂಗವಾಗಿ 2ಬಾರಿ ಇವರು ಕಾರ್ಯನಿರ್ವಹಿಸಿದ್ದಾರೆ
- ಅತ್ಯಂತ ನಿಷ್ಠೆ ಸಾಧನೆ ಸರಳತೆಯ ಮೂರ್ತಿಯಾಗಿರುವ ಡಾ.ವೈ.ಎಂ.ಭಜಂತ್ರಿಯವರು ಎನ್.ಎಸ್.ಎಸ್ ವಿಭಾಗದ ಅಧಿಕಾರಿಯಾಗಿ ಸತತ ಹನ್ನೆರಡು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಹತ್ತು ವಿಶೇಷ ಶಿಬಿರಗಳ ಆಯೋಜನೆ ಮಾಡಿದ್ದಾರೆ. ಮತ್ತು ಒಂದು ರಾಷ್ಟ್ರೀಯ ಸೌಹಾರ್ದತಾ ಶಿಬಿರವನ್ನು ಆಯೋಜನೆ ಮಾಡಿದ್ದಾರೆ.
ಒಂದು ಗ್ರಾಮದ ಪ್ರತಿಭೆಯಾದ ಡಾ.ವೈ.ಎಂ.ಭಜಂತ್ರಿಯವರು ಒಬ್ಬ ದಲಿತ ಕವಿ, ಸಾಹಿತಿ, ವಿಮರ್ಶಕ, ಸಂಶೋಧಕನಾಗಿ ಬೆಳೆದು ಸಾಹಿತ್ಯ ಕ್ಷೇತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮ ಸಾಧನೆಯಿಂದ ಮನೆ ಮಾತಾಗಿದ್ದಾರೆ. ಇವರು ಪಡೆದ ಪ್ರಶಸ್ತಿ ಪುರಸ್ಕಾರ ಗೌರವಗಳ ಬಗ್ಗೆ ತಿಳಿಯೋಣ.
ಡಾ.ವೈ.ಎಂ.ಭಜಂತ್ರಿಯವರಿಗೆ ಸಂದ ಪುರಸ್ಕಾರಗಳು :
ಒಬ್ಬ ಉತ್ತಮ ವಿದ್ಯಾರ್ಥಿ ಉಪನ್ಯಾಸಕರಾಗಿ, ದಲಿತ ಕವಿಯಾಗಿ, ಬುದ್ಧ, ಬಸವ, ಡಾ.ಬಾಬಾಸಾಹೇಬ ಅಂಬೇಡ್ಕರ್ವರ ಜೀವನ ಅವರ ಕುರಿತು ಚಿಂತನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಒಬ್ಬ ಉತ್ತಮ ವಾಘ್ಮಿಯಾಗಿರುವ ವಿದ್ಯಾರ್ಥಿಗಳ ಮೆಚ್ಚಿನ ಉಪನ್ಯಾಸಕರಾಗಿರುವ ಡಾ.ವೈ.ಎಂ.ಭಜಂತ್ರಿಯವರಿಗೆ ಹಲವಾರು ಗೌರವ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.
2009ರಲ್ಲಿ ಸಂಯುಕ್ತ ಕರ್ನಾಟಕ ಉತ್ತಮ ಕಥಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
2010ರಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ದೆಯಲ್ಲಿ ಇವರ ಕಥೆ ಅತ್ಯುತ್ತಮ ಕಥೆ ಎಂಬ ಪ್ರಶಸ್ತಿಯನ್ನು ಪಡೆದಿದೆ.
2016ರಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಬೋಧಗಯಾ ಕವಿಗೋಷ್ಠಿ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
2015ರಲ್ಲಿ ಭಾರತದಲ್ಲಿ ಶಿಕ್ಷಣದಲ್ಲಿ ಸಾಧನೆಗೈದವರಿಗೆ ನೀಡುವ ಡಾ.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕರತ್ನ ಪ್ರಶಸ್ತಿ ಇವರ ಮುಡಿಗೇರಿದೆ.
2004ರಲ್ಲಿ ಚಿತ್ರದುರ್ಗದಲ್ಲಿ ಶಿಕ್ಷಕ ಚೇತನ ಪ್ರಶಸ್ತಿಯು ಇವರ ಪಾಲಾಗಿದೆ.
2005ರಲ್ಲಿ ಚಿತ್ರದುರ್ಗದಲ್ಲಿ ಶಿಕ್ಷಣಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
2021ರಲ್ಲಿ ನೆಯ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ʼಸಾಹಿತ್ಯ ಶ್ರೀʼ ಪ್ರಶಸ್ತಿಯನ್ನು ಪಡೆದ ಹೆಮ್ಮೆಯು ಇವರಿಗೆ ಸಲ್ಲುತ್ತದೆ. ಈ ಪ್ರಶಸ್ತಿಯನ್ನು 13-06-2022ರಂದು ರಾಯಚೂರು ನಗರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರೇಕ್ಷಕರ ಸಭಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಪ್ರಧಾನ ಮಾಡಲಾಯಿತು.
ಸೂಕ್ಷ್ಮ ಮನೋಭಾವನೆಯ ವ್ಯಕ್ತಿತ್ವವನ್ನು ಹೊಂದಿರುವ ಇವರು ತಮ್ಮ ಸಾಧನೆಗಳ ಮೂಲಕ ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ. ಸಾಮಾಜಿಕ ರಂಗದಲ್ಲೂ ಸಹ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂಬುದು ಇವರ ಇತರ ಸಾಧನೆಗಳು ಮತ್ತು ಇವರು ಪಡೆದ ಗೌರವ ಪುರಸ್ಕಾರ ಮತ್ತು ಪ್ರಶಸ್ತಿಗಳ ಮೂಲಕ ತಿಳಿಯುತ್ತದೆ